Latest News

ಸಮಾಧಾನ ಕೇವಲ ಪ್ರಶ್ನೆ ಕೇಳಿದವರಿಗೆ ಮಾತ್ರವೇ ಅಲ್ಲ

Monday, December 21, 2009 , Posted by O Manase at 2:27 PM

ಓ ಮನಸೆಯ ಸಮಾಧಾನ ಅಂಕಣ ನನಗೆ ಬಹು ಪ್ರಿಯವಾದ ಅಂಕಣ. ನಾವು ಕಷ್ಟದಲ್ಲಿದ್ದಾಗ ನಮಗಿಂತಾ ಕಷ್ಟದಲ್ಲಿರುವವರನ್ನು ನೆನೆಸಿದರೆ ನಮ್ಮ ಕಷ್ಟಗಳು ದೊಡ್ಡದಲ್ಲ ಎನಿಸಿಬಿಡುತ್ತವೆ ಎಂದು ಹಿರಿಯರು ಹೇಳುತ್ತಾರೆ. ಆ ಕಾರಣಕಾಗಿಯೇನೋ ಅಂಕಣಕ್ಕೆ ಬರೆಯುವ ಓದುಗರ ಸಮಸ್ಯೆಗಳನ್ನು ಓದುತ್ತಿದ್ದರೆ ನಮ್ಮ ಸಮಸ್ಯೆಗಳು ಎಷ್ಟು ಚಿಕ್ಕವು ಸ್ವಲ್ಪ ಮನಸ್ಸು ಮಾಡಿದರೆ ನಾವೇ ಸುಲಭವಾಗಿ ಪರಿಹರಿಕೊಳ್ಳಬಹುದು ಎನಿಸುತ್ತದೆ. ಆ ಕಾರಣದಿಂದಾಗಿಯೇ ನಾನು ತುಂಬಾ ದುಃಖದಲ್ಲಿದ್ದಾಗ, ಖಿನ್ನನಾಗಿದ್ದಾಗ, ಬೇಜಾರಾದಾಗ ಸಮಾಧಾನ ಅಂಕಣ ಓದಲು ಬಯಸುತ್ತೇನೆ. ಓದುಗರು ಕಲಿಸುವ ಪ್ರಶ್ನೆ ಏನೇ ಇರಲಿ, ಅವರ ಸಮಸ್ಯೆಗಳು ಏನೇ ಇರಲಿ ಅದಕ್ಕೆ ಸಿಗುವ ಉತ್ತರದಲ್ಲಿ ಎಲ್ಲರಿಗೂ ಬೇಕಾದ ಒಂದು ಸಮಾಧಾನದ ಮಾತು, ಸಮಸ್ಯೆಗೆ ಪರಿಹಾರ ಗೋಚರವಾಗುತ್ತದೆ.

ಓ ಮನಸೇಯಲ್ಲಿ ಪ್ರಕಟವಾಗುವ ಅನೇಕ ಅಂಕಣಗಳೆಲ್ಲ ಚೆನ್ನಾಗಿದ್ದು, ಇಷ್ಟವಾದರೂ ಯಾವುದಾದರು ಒಂದು ಅಂಕಣ, ಬರಹ ಕಥೆ ನಮ್ಮ ಮನಸಿಗೆ ತುಂಬ ಹತ್ತಿರವಾಗುತ್ತವೆ. ಓ ಮನಸೇಯಲ್ಲಿ ನಿಮಗೆ ಇಷ್ಟವಾದ ಬರಹ, ಅಂಕಣ ಯಾವುದು ಮತ್ತು ಏಕೆ ಎಂಬುದನ್ನು ನಮ್ಮೊಂದಿಗೆ ಇಲ್ಲಿ ಹಂಚಿಕೊಳ್ಳಿ.

O Manase SMS Alerts. Subscribe to Free SMS Alerts. To Subscribe from your mobile phone type ON OManaseKannada and send sms to +919870807070

Currently have 0 comments:

Leave a Reply

Post a Comment

ಹಿಂದಿನ ಸಂಚಿಕೆಗಳು